Loading…
Loading…
(You are in the browser Reader mode)
ಅಧ್ಯಾಯ-17
ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರ ಮಹಾಸಂಕಟದ ಸಮಯ - ಭಾಗ 1
ದೇವರ ಉಗ್ರಕೋಪವೆಂಬ ಉಪದ್ರವಗಳು ಸುರಿಸಲ್ಪಡುವವು
ಗಂಭೀರವಾದ ಘಟನೆಗಳು ಇನ್ನೇನು ನಮ್ಮ ಮುಂದೆ ಕಂಡುಬರಲಿವೆ. ತುತ್ತೂರಿ ಊದಿದ ನಂತರ ತಿರುಗಿ ತುತ್ತೂರಿ ಊದಲ್ಪಡುವುದು. ಆಗ ಈ ಲೋಕದಲ್ಲಿರುವ ಜನರ ಮೇಲೆ ಉಪದ್ರವದ ಮೇಲೆ ಉಪದ್ರವವು ಒಂದಾದ ನಂತರ ಇನ್ನೊಂದು ಸುರಿಯಲ್ಪಡುವುದು (ಸೆಲೆಕ್ಟಡ್ ಮೆಸೇಜಸ್, ಸಂಪುಟ 3, ಪುಟ 426). ಕೊಕಾಘ 139.1
ಕರುಣೆಯ ದೂತನು ಶೀಘ್ರದಲ್ಲಿಯೇ ಈ ಲೋಕವನ್ನು ಬಿಟ್ಟು ಹೋಗುವನು. ಆಗ ಕೊನೆಯ ಏಳು ಉಪದ್ರವಗಳು ಸುರಿಸಲ್ಪಡುವವು... ದೇವರ ಉಗ್ರಕೋಪವು ಬೇಗನೆ ಈ ಲೋಕದ ಮೇಲೆ ಕಂಡುಬರುವುದು, ಆತನು ತನ್ನ ಆಜ್ಞೆಗಳನ್ನು ಮೀರಿದ ಕೆಟ್ಟವರನ್ನು ದಂಡಿಸಲು ಆರಂಭಿಸಿದಾಗ, ಅದು ಮುಗಿಯುವ ತನಕ ಅವರಿಗೆ ವಿಶ್ರಾಂತಿ ದೊರೆಯುವುದಿಲ್ಲ (ಟೆಸ್ಟಿಮೊನೀಸ್ ಟು ಮಿನಿಸ್ಟರ್ಸ್, ಪುಟ 182). ಕೊಕಾಘ 139.2